‘‘ಇವನ್ಯಾರವ... ಇವನ್ಯಾರವ... ಎನ್ನದಿರಯ್ಯ. ಇವ ನಮ್ಮವ... ಇವ ನಮ್ಮವ... ಎಂದೆಣಿಸಯ್ಯ ಕೂಡಲ ಸಂಗಮದೇವ’’

ಒತ್ತೆಯ ಸೂಳೆ[ಗೆ] ಒತ್ತೆಯ ತೋರುವಂತೆ,

ಒತ್ತೆಯ ಸೂಳೆ[ಗೆ] ಒತ್ತೆಯ ತೋರುವಂತೆ,
ಹೆತ್ತ ತಾಯಿಗೆ ಮಲತಾಯ ತೋರುವಂತೆ,
ಸತ್ಯಕ್ಕೆ ಅಸತ್ಯವ ತೋರುವ ಭಕ್ತಿಹೀನ
ತೊತ್ತುಗುಲವರಿದು ಸತ್ತಹಾಗೆ ಸುಮ್ಮನಿರಿರೆ.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ.

- ಕುಷ್ಟಗಿ ಕರಿಬಸವೇಶ್ವರ

ಮಗುವಿನ ಮಾತು ಹೆತ್ತವರಿಗೆ ಪ್ರೀತಿಯಪ್ಪ

ಮಗುವಿನ ಮಾತು ಹೆತ್ತವರಿಗೆ ಪ್ರೀತಿಯಪ್ಪ
ಗುರುವಿನ ಮನಸ್ಸು ಶಿಷ್ಯಾನಿಗೆ ಪ್ರೀತಿಯಪ್ಪ
ಎನ್ನ ಮಾತು ಮತ್ತೊಬ್ಬ ಶರಣರಿಗೆ ಪ್ರೀತಿಯಪ್ಪ
ಶರಣ ಶರಣೆ ಎನ್ನ ಮಾತಾಪಿತರು ಕಾಣಾ ಕರಸ್ಥಲದೇವ.
ದ್ಯಾವನೂರು ಮಂಜುನಾಥ್